ಮುಚ್ಚಿ

ತೋಟಗಾರಿಕೆ ಇಲಾಖೆ

ಪರಿಚಯ

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು 121281.00 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಒಟ್ಟು ಸಾಗುವಳಿ ಪ್ರದೇಶದ ಶೇ.43.03 ರಷ್ಟಿದೆ. ಮಲೆನಾಡು ಪ್ರದೇಶದಲ್ಲಿ ತೋಟದ ಬೆಳೆ ಮತ್ತು ಸಾಂಬಾರು ಬೆಳೆ ಹೆಚ್ಚಾಗಿದ್ದು, ಅರೆ ಮಲೆನಾಡಿನಲ್ಲಿ ಈ ಬೆಳೆಗಳ  ಜೊತೆಗೆ ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಲಾಗುತ್ತಿದೆ. ಈ ಹಿಂದೆ ಅಡಿಕೆ ಸಾಂಪ್ರದಾಯಿಕ ಬೆಳೆಯಾಗಿ ಮಲೆನಾಡಿಗೆ ಸೀಮಿತವಾಗಿತ್ತು. ಈಗಿನ ವಿವಿಧ ತರಹದ ಬೇಡಿಕೆಗಳಿಂದಾಗಿ ಅರೆಮಲೆನಾಡಿಗೂ ವಿಸ್ತರಿಸಿದೆ. ಅಡಿಕೆ (92,181 ಹೆ) ಜೊತೆ ಇಲ್ಲಿನ ವಾತಾವರಣ ಸೂಕ್ತವಾಗಿದ್ದರಿಂದ ತೆಂಗು (6,040ಹೆ) ಕೋಕೋ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಶುಂಠಿ (3,828 ಹೆ), ಕಾಳುಮೆಣಸು (4,131ಹೆ), ಏಲಕ್ಕಿ (110 ಹೆ), ಮರಸಾಂಬಾರು ದಾಲ್ಚಿನ್ನಿ, ಜಾಯಿಕಾಯಿ ಮತ್ತು ಜಾಪತ್ರೆ ಸಾಂಬಾರು ಬೆಳೆಗಳು ಜನಪ್ರಿಯವಾಗಿವೆ. ಬಾಳೆ (6,321ಹೆ), ಮಾವು (3,618 ಹೆ), ಅನಾನಸ್ (1,475 ಹೆ), ಮುಂತಾದ ಹಣ್ಣುಗಳ ಕೃಷಿ ಮಾಡಲಾಗುತ್ತಿದೆ. ಅರೆ ಮಲೆನಾಡಿನಲ್ಲಿ ಮೆಣಸಿನಕಾಯಿ ಪ್ರಮುಖ ತರಕಾರಿ ಬೆಳೆ, ಬೀನ್ಸ್, ಬದನೆ, ಟಮೋಟೋ, ಎಲೆಕೋಸು ಮತ್ತು ಸೊಪ್ಪಿನ ತರಕಾರಿಗಳು ಕಡಿಮೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳು ವೆನಿಲ್ಲ, ಪಚೋಲಿ, ಹಿಪ್ಪಲಿ ಬೆಳೆಗಳು ಜನಪ್ರಿಯವಾಗಿವೆ. ಗುಲಾಬಿ, ಮಲ್ಲಿಗೆ, ಸೇವಂತಿಗೆ, ಕನಕಾಂಬರ ಮತ್ತು ಸುಗಂಧರಾಜ ಹೂಗಳನ್ನು ಸಹ ಬೆಳೆಯಲಾಗುತ್ತಿದೆ. ಹಸಿರು ಮತ್ತು ಪಾಲಿಹೌಸ್ ಗಳಲ್ಲಿ ಆಂಥೋರಿಯಂ ಮತ್ತು ಜರ್ಬೆರಾ ಕೃಷಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿದೆ.

horti1
horti4

ಶಿವಮೊಗ್ಗ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ತನ್ನದೇ ಆದ ಪಾತ್ರ ವಹಿಸುತ್ತಾ, ಬಂದಿದೆ.  ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಪ್ರಯತ್ನದಲ್ಲಿ ತೊಡಗಿದೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 51.53 ಎಕರೆ ಪ್ರದೇಶದ ನಾಲ್ಕು ತೋಟಗಾರಿಕೆ ಕ್ಷೇತ್ರಗಳಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ಅಭಿವೃದ್ಧಿಪಡಿಸಿದೆ. ಉತ್ತಮ ಗುಣಮಟ್ಟದ ಕಸಿ/ಸಸಿ ಗಿಡಗಳ ಸಸ್ಯಾಭಿವೃದ್ಧಿ ಮಾಡಲಾಗುತ್ತಿದೆ. ರಾಜ್ಯವಲಯ ವ್ಯಾಪ್ತಿಯಲ್ಲಿ 326.15 ಎಕರೆ ಪ್ರದೇಶದ ಎಂಟು ತೋಟಗಾರಿಕೆ ಕ್ಷೇತ್ರಗಳಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಮಾವು, ಸಪೋಟ, ತೆಂಗು ಮತ್ತು ಅಡಿಕೆ ಬೆಳೆಗಳನ್ನು ಅಧಿಕ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ತಾಳೆ, ಗೋಡಂಬಿ, ಹುಣಸೆ, ಕೋಕೋ, ನೆಲ್ಲಿ, ಚೆರ್ರಿ ಮತ್ತು ಕಮರಕ್ ಕಡಿಮೆ ಪ್ರದೇಶದಲ್ಲಿ ಬೆಳೆಯಲಾಗಿದೆ. ತೋಟಗಾರಿಕೆ ಕ್ಷೇತ್ರದಲ್ಲಿ ಉತ್ತುಮ ಗುಣಮಟ್ಟದ ಕಸಿ/ಸಸಿ ಗಿಡಗಳ ಸಸ್ಯಾಭಿವೃದ್ಧಿಪಡಿಸಲಾಗುತ್ತಿದ್ದು, ಕ್ಷೇತ್ರದಿಂದ ನೇರವಾಗಿ ರೈತರಿಗೆ ವಿತರಿಸುತ್ತಿದೆ. ಮೂಲಭೂತ ಸೌಕರ್ಯಗಳಾದ ಪಾಲಿಮನೆ, ಶೇಡ್ ನೆಟ್ ಮತ್ತು ನೀರಿನ ಸೌಕರ್ಯ ಹೊಂದಿದ ಕ್ಷೇತ್ರಗಳಲ್ಲಿ ಉತ್ಕೃಷ್ಟ ಹಾಗೂ ಉತ್ತಮ ಗುಣಮಟ್ಟದ ಕಸಿ/ಸಸಿಗಳನ್ನು ಉತ್ಪಾದಿಸಲಾಗುತ್ತಿದೆ. ಎಲೆ ವಿಶ್ಲೇಷಣೇ ಪ್ರಯೋಗಾಲಯದಲ್ಲಿ ಕೆಲವು ತೋಟಗಾರಿಕೆ ಬೆಳೆಗಳ ಎಲೆಳನ್ನು ಹಾಗೂ ವಿವಿಧ ನಮೂನೆಯ ಹಣ್ಣಿನ ಮಾದರಿಗಳನ್ನು ವಿಶ್ಲೇಷಿಸಿ, ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಅಂಗಾಂಶ ಕೃಷಿ ಗಿಡಗಳ ಹಾರ್ಡನಿಂಗ್ ಘಟಕದಲ್ಲಿ ಅಂಗಾಂಶ ಕೃಷಿ ಬಾಳೆ ಗಿಡಗಳನ್ನು ಹದಗೊಳಿಸಿ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

2019-20ನೇ ಸಾಲಿನಲ್ಲಿ ಇಲಾಖೆಯು ಜಿಲ್ಲಾ ಪಂಚಾಯತ್ ಯೋಜನೆಗಳಡಿಯಲ್ಲಿ ಹನಿ ನೀರಾವರಿಗೆ, ತಾಳೆ ಗಿಡಗಳ ಬೇಸಾಯಕ್ಕೆ ಹಾಗೂ ಸಸ್ಯ ಸಂರಕ್ಷಣೆ ಔಷಧಿಗಳಿಗೆ ರೈತರಿಗೆ ನೇರವಾಗಿ ಸಹಾಯಧನವನ್ನು ನೀಡಲಾಗುತ್ತಿದೆ. ಹಣ್ಣಿನ ಬೆಳೆಗಳಾದ ಮಾವು, ಸಪೋಟ, ಬಾಳೆ, ಅನಾನಸ್ ಹೂವಿನ ಗಿಡಗಳಾದ ಗುಲಾಬಿ, ಸುಗಂಧರಾಜ, ಸಾಂಬಾರು ಬೆಳೆಗಳಾದ ಕಾಳುಮೆಣಸು, ಶುಂಠಿ, ದಾಲ್ಚಿನ್ನಿ ಮತ್ತು ಲವಂಗ ಗಿಡಗಳನ್ನು ಬೆಳೆದ ರೈತರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನವನ್ನು ವಿತರಿಸಲಾಗುತ್ತಿದೆ. ತೋಟಗಾರಿಕೆಗೆ ಉಪಯೋಗವಾಗುವ ಯಂತ್ರ/ ಉಪಕರಣಗಳ ಖರೀದಿಗೆ ವಿವಿಧ ಯೋಜನೆಗಳಡಿ ಸಹಾಯಧನವನ್ನು ನೀಡಲಾಗುತ್ತಿದೆ.

2019-20ನೇ ಸಾಲಿನ ಪ್ರಗತಿ ವಿವರ ಜನವರಿ 2020 ಮಾಹೆಯ ಅಂತ್ಯಕ್ಕೆ(ರೂ. ಲಕ್ಷಗಳಲ್ಲಿ)

ಕೇಂದ್ರ ವಲಯ ಯೋಜನೆಗಳು
ಯೋಜನೆಗಳು ಗುರಿ ಬಿಡುಗಡೆ ಸಾಧನೆ
1. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಹನಿ ನೀರಾವರಿ) 385.50 292.29 247.29
2. ಉತ್ಪಾದನಾ ಸುಧಾರಣಾ ಕಾರ್ಯ ಯೋಜನೆಗೆ ತೆಂಗಿನಲ್ಲಿ ಸಂಯೋಜಿತ ಬೇಸಾಯ 85.29 13.31 10.83
3. ರಾಷ್ಟ್ರೀಯ ತೋಟಗಾರಿಕೆ ಮಿಷನ್ 898.19 424.42 396.80
4. ರಾಷ್ಟ್ರೀಯ ಕೃಷಿ ವಿಕಾಸ 145.00 124.50 122.63
5. ತೋಟಗಾರಿಕೆಯಲ್ಲಿ ಯಾಂತ್ರೀಕರಣ 142.00 142.00 118.74
ರಾಜ್ಯವಲಯ ಯೋಜನೆಗಳು
ಯೋಜನೆಗಳು ಗುರಿ ಬಿಡುಗಡೆ ಸಾಧನೆ
1. ಸಮಗ್ರ ತೋಟಗಾರಿಕಾ ಅಭಿವೃದ್ದಿ 351.49 270.49 258.10
2. ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ 64.00 64.00 58.696
3. ಮಧುವನ ಮತ್ತು ಜೇನು ಸಾಕಾಣೆ ಅಭಿವೃದ್ಧಿ 44.47 32.00 28.40
4. ಕೃಷಿ ಕ್ಷೇತ್ರ ಮತ್ತು ಸಸ್ಯವಾಟಿಕೆಗಳ ಅಭಿವೃದ್ಧಿ ಮತ್ತು ನಿರ್ವಹಣೆ 9.89 6.50 5.96
5. ಇಲಾಖಾ ಪ್ರಯೋಗಶಾಲೆಗಳ ಅಭಿವೃದ್ಧಿ 0.60 0.60 0.50
ಜಿಲ್ಲಾ ವಲಯದ ಯೋಜನೆಗಳು
ಯೋಜನೆಗಳು ಗುರಿ ಬಿಡುಗಡೆ ಸಾಧನೆ
1. ರಾಷ್ಟ್ರೀಯ ಎಣ್ಣೆಕಾಳು ಮತ್ತು ಎಣ್ಣೆ ತಾಳೆ ಅಭಿಯಾನ ಯೋಜನೆ 7.50 7.50 7.00
2. ತೋಟಗಾರಿಕೆ ಬೆಳೆಗಳಿಗೆ ವಿಶೇಷ ಹನಿ ನೀರಾವರಿ 60.00 60.00 53.58
3. ತೋಟಗಾರಿಕೆ ಕಟ್ಟಡಗಳು 53.58 0.00 0.00
4. ತೋಟಗಾರಿಕೆ ಕ್ಷೇತ್ರಗಳ ನಿರ್ವಹಣೆ 15.00 15.00 11.05
5. ತೆಂಗು ಬೀಜ ಸಂಗ್ರಹಣೆ ಮತ್ತು ನರ್ಸರಿ ನಿರ್ವಹಣೆಗಾಗಿ ಯೋಜನೆ 10.00 10.00 6.96
6. ಪ್ರಚಾರ ಮತ್ತು ಸಾಹಿತ್ಯ 5.00 5.00 2.00
7. ಶೀಥಲ ಗೃಹಗಳಿಗೆ ಸಹಾಯಧನ ಯೋಜನೆ 2.86 2.86 1.10
8. ಜೇನು ಸಾಕಾಣಿಕೆ 24.79 24.79 18.15
9. ರೈತರಿಗೆ ಸಹಾಯ 31.00 31.00 25.10
10. ರೈತರಿಗೆ ತರಬೇತಿ 2.50 2.50 1.00

ಮಾಹಿತಿ ಹಕ್ಕು

ಮಾಹಿತಿ ಹಕ್ಕು – 4(1) A                    ಮಾಹಿತಿ ಹಕ್ಕು – 4(1) B

ಇಲಾಖೆಯ ಅಂಕಿ ಅಂಶಗಳು (ಜಿಲ್ಲಾ)

ಇಲಾಖೆಯ ಅಂಕಿ ಅಂಶಗಳು

ಸಂಪರ್ಕ ವಿವರಗಳು

ತೋಟಗಾರಿಕೆ ಉಪನಿರ್ದೇಶಕರು (ಜಿಲ್ಲಾ ಪಂಚಾಯತ್),

ಗಾಂಧಿಪಾರ್ಕ್, ಶಿವಮೊಗ್ಗ

ದೂ.ಸಂ : 08182-222633

ಇ-ಮೇಲ್ : ddhsmg@gmail.com

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ), ಗಾಂಧಿಪಾರ್ಕ್, ಶಿವಮೊಗ್ಗ

ದೂ.ಸಂ : 08182-270415
ಮೊ : 9448036611
ಇ-ಮೇಲ್ : sadhzpsmg@gmail.com

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ತರೀಕೆರೆ ರಸ್ತೆ, ಗಾಂಧಿ ವೃತ್ತ, ಭದ್ರಾವತಿ

ದೂ.ಸಂ : 08282-268239
ಮೊ : 9980148921
ಇ-ಮೇಲ್ : adhbhadravathi@gmail.com

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ), ಎಲ್.ಐ.ಸಿ. ಕಛೇರಿ ಎದುರು, ಎಸ್.ಎಸ್. ರಸ್ತೆ, ಶಿಕಾರಿಪುರ

ದೂ.ಸಂ : 08187-223544
ಮೊ : 9663634388
ಇ-ಮೇಲ್ : sadhshikaripura@gmail.com

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಎಲ್.ಐ.ಸಿ. ಕಛೇರಿ ಎದುರು, ಎಸ್.ಎಸ್. ರಸ್ತೆ, ಸೊರಬ

ದೂ.ಸಂ : 08184-272112
ಮೊ : 9108280642
ಇ-ಮೇಲ್ : sadhsorab@gmail.com

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ), ಅಗ್ರಹಾರ, ಸಾಗರ

ದೂ.ಸಂ : 08183-226193
ಮೊ : 9964512759
ಇ-ಮೇಲ್ : sadhsagarzp@gmail.com

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ), ಕುಶಾವತಿ, ತೀರ್ಥಹಳ್ಳಿ

ದೂ.ಸಂ : 08181-228151
ಮೊ : 9900046084
ಇ-ಮೇಲ್ : sadhtth@gmail.com

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ), ಗಂಗನಕೊಪ್ಪ ತೋಟಗಾರಿಕೆ ಕ್ಷೇತ್ರ, ಹೊಸನಗರ

ದೂ.ಸಂ : 08185-221364
ಮೊ : 9591695327
ಇ-ಮೇಲ್ : adhhos@gmail.com

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ರಾಜ್ಯವಲಯ), ಗಾಂಧಿಪಾರ್ಕ್, ಶಿವಮೊಗ್ಗ

ದೂ.ಸಂ : 08182-222794
ಮೊ : 9900046082
ಇ-ಮೇಲ್ : sadhsssmg@gmail.com

ತೋಟಗಾರಿಕೆ ಉಪನಿರ್ದೇಶಕರು, ಪುಷ್ಪಬೇಸಾಯ ಕೇಂದ್ರ, ಬಯೋಸೆಂಟರ್, ಬಿ.ಹೆಚ್.ರಸ್ತೆ, ಶಿವಮೊಗ್ಗ

ದೂ.ಸಂ : 08182-240075
ಮೊ : 9980790156
ಇ-ಮೇಲ್ : coeflorismg@gmail.com

ಸಹಾಯಕ ತೋಟಗಾರಿಕೆ ನಿರ್ದೇಶಕರು, ಬಯೋಸೆಂಟರ್, ಬಿ.ಹೆಚ್.ರಸ್ತೆ,  ಶಿವಮೊಗ್ಗ

ದೂ.ಸಂ : 08182-220422
ಮೊ : 9900903393
ಇ-ಮೇಲ್ : coeflorismg@gmail.com

ಸಹಾಯಕ ತೋಟಗಾರಿಕೆ ನಿರ್ದೇಶಕರು, ಎಲೆ ವಿಶ್ಲೇಷಣೆ ಪ್ರಯೋಗಾಲಯ, ಬಯೋಸೆಂಟರ್, ಬಿ.ಹೆಚ್.ರಸ್ತೆ,  ಶಿವಮೊಗ್ಗ

ದೂ.ಸಂ : 08182-220422
ಮೊ : 9900280416
ಇ-ಮೇಲ್ : labadh@gmail.com