ಮುಚ್ಚಿ

ಪ್ರವಾಸೋದ್ಯಮ ಇಲಾಖೆ

ಪರಿಚಯ

ಕರ್ನಾಟಕ ಸರ್ಕಾರ, ಪ್ರವಾಸೋದ್ಯಮ ಇಲಾಖೆ, 1974 ರಲ್ಲಿ ಸ್ಥಾಪನೆಯಾದ ಇಲಾಖೆಯು, ಕರ್ನಾಟಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಮತ್ತು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿದೆ. ಹೊಸ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಹೊಸ ಪ್ರವಾಸೋದ್ಯಮ ಯೋಜನೆಗಳನ್ನು ಉತ್ತೇಜಿಸುವ ಮೂಲಕ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮ ವ್ಯಾಪಾರ ಮೇಳಗಳು, ಹೂಡಿಕೆದಾರರ ಸಭೆ, ರಸ್ತೆ ಪ್ರದರ್ಶನಗಳು, ಥೀಮ್ ಅಭಿಯಾನಗಳಲ್ಲಿ ಭಾಗವಹಿಸುವ ಮೂಲಕ ಕರ್ನಾಟಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇಲಾಖೆ ನಿರಂತರವಾಗಿ ಪ್ರಯತ್ನಿಸುತ್ತಿದೆ.

ಪ್ರವಾಸೋದ್ಯಮ ಇಲಾಖೆಯ ಸಂಕ್ಷಿಪ್ತ ಟಿಪ್ಪಣಿ

ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡುವ ದೇಶಿಯ ಮತ್ತು ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ  ಇಲಾಖೆಯಿಂದ ಜಿಲ್ಲೆಯಲ್ಲಿರುವ  ಪ್ರವಾಸಿ ತಾಣಗಳಿಗೆ, ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ, ಕೂಡು ರಸ್ತೆ ಅಭಿವೃದ್ದಿ, ಮೂಲಭೂತ ಸೌಲಭ್ಯ ಅಭಿವೃದ್ಧಿ ಇತ್ಯಾದಿ.

ಪ್ರವಾಸೋದ್ಯಮ ಇಲಾಖೆಯ ಗುರಿಗಳು

  • ಪುನರಾವರ್ತಿತವಾಗಿ ಭೇಟಿ ನೀಡುವುದಕ್ಕೆ, ಪ್ರವಾಸಿಗರು ಹೆಚ್ಚುದಿನಗಳ ಕಾಲ ಉಳಿಯುವಂತೆ ಪ್ರೋತ್ಸಾಹಿಸುವಂತಹ ಪ್ರವಾಸೋದ್ಯಮ ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ ಪ್ರೋತ್ಸಾಹ ನೀಡುವುದು.
  • ಪರಿಸರವನ್ನು ಮತ್ತು ಜೀವಿ ಪರಿಸರವನ್ನು ರಕ್ಷಿಸಿ ಜಿಲ್ಲೆಯಲ್ಲಿ ಸುರಕ್ಷಿತ, ಸಮರ್ಥನೀಯ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು.

ಒದಗಿಸಲಾಗುತ್ತಿರುವ ಸಾರ್ವಜನಿಕ ಸೇವೆಗಳು

ಕಛೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಇಲಾಖೆಯ ಯೋಜನೆಗಳ ಮಾಹಿತಿ ನೀಡುವುದು, ಪ್ರವಾಸಿ ಟ್ಯಾಕ್ಷಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಜಿಲ್ಲೆಯ ಪ್ರವಾಸಿ ತಾಣಗಳ, ಸೌಲಭ್ಯಗಳ ಮಾಹಿತಿ ನೀಡುವುದು.

tourism kan

ಪ್ರಮುಖ ಯೋಜನೆಗಳು, ಯೋಜನೆಗಳ ವಿವರ, ಸಾಧಿಸಿದ ಪ್ರಗತಿ

  • ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯಲ್ಲಿರುವ  ಪ್ರವಾಸಿ ತಾಣಗಳಿಗೆ, ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ, ಕೂಡು ರಸ್ತೆ ಅಭಿವೃದ್ದಿ, ಮೂಲಭೂತ ಸೌಲಭ್ಯ ಅಭಿವೃದ್ಧಿ,
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದವ ನೀರುದ್ಯೋಗಿ ವಿದ್ಯಾವಂತ ಯುವಕ/ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಡಲು ರೂ.3.00ಲಕ್ಷಗಳ ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಷಿ ಖರೀದಿಸುವ ಯೋಜನೆ.
  • ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಬಡವಾಣೆಯಲ್ಲಿ ಡಾರ್ಮೀಟರಿ ನಿರ್ಮಾಣ ರೂ.50.00 ಲಕ್ಷ ಅನುದಾನದಲ್ಲಿ   ಪೂರ್ಣಗೊಂಡಿದೆ.
  • ಶಿವಮೊಗ್ಗ ನಗರ ಶಾಲೀನ ದರ್ಗ ಬಳಿ ಡಾರ್ಮೀಟರಿ ನಿರ್ಮಾಣ ರೂ.50.00 ಲಕ್ಷ ಅನುದಾನದಲ್ಲಿ ಪೂರ್ಣಗೊಂಡಿದೆ.
  • ಸಾಗರ ತಾಲ್ಲೂಕು ಕೆಳದಿಯಲ್ಲಿ ಯಾತ್ರಿನಿವಾಸ ನಿರ್ಮಾಣ ರೂ.50.00 ಲಕ್ಷ ಅನುದಾನದಲ್ಲಿ ಪೂರ್ಣಗೊಂಡಿದೆ.
  • ತೀರ್ಥಹಳ್ಳಿ ತಾ: ಕವೆಲೆದುರ್ಗ ಕೆಳದಿ ರಾಜಗುರು ಮಹಮಹತ್ತಿನ ಭುವನಗಿರಿ ಸಂಸ್ಥಾನ ಮಠ ಯಾತ್ರಿನಿವಾಸ ನಿರ್ಮಾಣ   ರೂ.110.00 ಲಕ್ಷ ಅನುದಾನದಲ್ಲಿ ಪೂರ್ಣಗೊಂಡಿದೆ.
  • ಭದ್ರಾವತಿ ತಾ: ಆನವೇರಿಯಲ್ಲಿ ಮಾವುರದಮ್ಮ ದೇವಸ್ಥಾನ ಹತ್ತೀರ  ಯಾತ್ರಿನಿವಾಸ ನಿರ್ಮಾಣ ರೂ.50.00 ಲಕ್ಷ   ಅನುದಾನದಲ್ಲಿ ಪೂರ್ಣಗೊಂಡಿದೆ.
  • ಶಿವಮೊಗ್ಗ ತಾಲ್ಲೂಕು ಆಯನೂರು ಹೋಬಳಿ ಮಲೇಶಂಕರ ಗ್ರಾಮದಲ್ಲಿ ರೂ.25.00 ಲಕ್ಷ ಅನುದಾನದಲ್ಲಿ ಯಾತ್ರಿನಿವಾಸ
  • ಶಿವಮೊಗ್ಗ ನಗರದ ಶಿವಪ್ಪನಾಯಕ ಅರಮನೆ ಬಳಿ ರೂ.30  ಲಕ್ಷಗಳ  ಅನುದಾನದಲ್ಲಿ ಹೈಟೆಕ್ ಶೌಚಾಲಯ     ನಿರ್ಮಾಣಗೊಂಡಿದೆ.
  • ಶಿವಮೊಗ್ಗ ಜಿಲ್ಲೆ ಸೊರಬ ತಾ: ಚಂದ್ರಗುತ್ತಿ ಪ್ರವಾಸಿ ಕೇಂದ್ರದಲ್ಲಿ ರೂ.50.00 ಲಕ್ಷಗಳ  ಅನುದಾನದಲ್ಲಿ ನಿರ್ಮಾಣಗೊಂಡಿದೆ.
  • ಶಿಕಾರಿಪುರ ತಾಲ್ಲೂಕು ಮಾಳಗೋಂಡನಕೊಪ್ಪ ‍ಗ್ರಾಮದಿಂದ ಅನುಮಿಷಾರಣ್ಯ ಜನ್ಮಸ್ಥಳ ದೇವಸ್ಥಾನಕ್ಕೆ ಕಾಂಕ್ರೀಟ್ ರಸ್ತೆ ಹಾಗೂ ಕಾಂಪೌಂಡ್ ರೂ.50.00 ಲಕ್ಷಗಳ ಅನುದಾನದಲ್ಲಿ  ನಿರ್ಮಾಣಗೊಂಡಿದೆ.
  • 2019-20ನೇ ಸಾಲಿನಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗದ ವಿದ್ಯಾವಂತ ನಿರುದ್ಯೋಗಿಗಳಿಗೆ  ಸ್ವಯಂ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರವಾಸಿ  ಟ್ಯಾಕ್ಸಿ ಖರೀದಿಸಲು ಒಟ್ಟು 19 ಗುರಿ ನಿಗಧಿಯಾಗಿದ್ದು ಇದರಲ್ಲಿ ನಾಲ್ಕು ಫಲಾನುಭವುಗಳಿಗೆ ರೂ.3.00 ಲಕ್ಷಗಳಂತೆ ಒಟ್ಟು ರೂ.12.00ಲಕ್ಷಗಳ ಸಹಾಯಧನ ಬಿಡುಗಡೆ ಮಾಡಲಾಗಿದೆ.
  • ಕರ್ನಾಟಕ ದರ್ಶನ ಯೋಜನೆ, ಸರ್ಕಾರಿ ಫ್ರೌಡ ಶಾಲೆಗಳ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಬ್ಬ ವಿಧ್ಯಾರ್ಥಿಗೆ ರೂ.3500/-ಗಳಲ್ಲಿ ಉಚಿತ ಕರ್ನಾಟಕ ದರ್ಶನ ಪ್ರವಾಸ ಕೈಗೊಳುವ ಯೋಜನೆ.
  • 2019-20ನೇ ಸಾಲಿನ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಎಸ್.ಸಿ.ಪಿ-353 ಮತ್ತು ಟಿ.ಎಸ್.ಪಿ-150 ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ -385 ವಿದ್ಯಾರ್ಥೀಗಳಿಗೆ  ಒಬ್ಬ ವಿದ್ಯಾರ್ಥೀ ರೂ.3500/-ಗಳಂತೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು  ಏರ್ಪಡಿಸಿ ಪೂರ್ಣಗೊಳಿಸಿದೆ.

ಜಿಲ್ಲಾ ಮಟ್ಟದ ಅಧಿಕಾರಿಗಳ ಸಂಪರ್ಕ

ಶ್ರೀ.ಹೆಚ್.ಎಸ್.ರಾಮಕೃಷ್ಣ
ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ,
ಎ, ಬ್ಲಾಕ್,  3ನೇ ತಿರುವು, ಗೋಪಾಳಗೌಡ ಬಡಾವಣೆ, ಶಿವಮೊಗ್ಗ

ದೂ.ಸಂ : 08182-251444
ಮೊ : 9448238921
ಇ-ಮೇಲ್ : adtourismsmg@gmail.com